ಹೈದರ್‌ಗುಡದಲ್ಲೊಬ್ಬ ಹೈದ

ಹೈದರ್‌ಗುಡದಲ್ಲೊಬ್ಬ
ಹೈದನಿದ್ದನು ನೋಡು
ಹಲವು ವರ್ಷಗಳ ಕಾಲ
ಮಾತಿಲ್ಲ ಕತೆಯಿಲ್ಲ
ಯಾರೇನ ಕೇಳಿದರು
ಮೌನವೇ ಉತ್ತರವು

ಕೊನೆಗೊಬ್ಬ ಬೈರಾಗಿ
ಆ ದಾರಿ ಬಂದವನು
ಕೊಟ್ಟನು ಹಿಡಿ ರಾಗಿ
ಏನಾಶ್ಚರ್ಯ!
ಬಾಲಕನು ಒಮ್ಮೆಲೇ
ಮಾತಾಡತೊಡಗಿದನು

ಏನು ವ್ಯಾಕರಣ ಶುದ್ಧಿ
ಒಂದು ದಿನದೊಳಗೆ
ಎಂಥ ಭಾಷಾ ಸಿದ್ಧಿ!
ಜನರೆಂದರು-ಅಲ್ಲಾನ ದಯೆ
ಅದು ಬೈರಾಗಿಯಾಗುವುದು
ರಾಗಿಯೂ ಆಗುವುದು

ಕ್ರಮೇಣ ಎಲ್ಲರೂ
ಬೈರಾಗಿಯನು ಮರೆತರು
ರಾಗಿಯನೂ ಮರೆತರು
ಹೈದರ್‌ಗುಡದೊಳಗೆ ಈಗ
ಹೈದನೂ ಕಾಣಿಸನು
ಅವನ ಮಾತೂ ಕೇಳಿಸದು

ಎಲ್ಲಿ ಹೋದನು ಅವನು
ವಾಕ್ಯಗಳ ಮಾಡುತಿದ್ದವನು
ಸಿಕಂದರಾಬಾದಿನಲಿ
ಮೂಟೆಗಳ ಹೊರುವನು
ಪ್ರತಿಯೊಂದು ಗಾಡಿಯನು
ಕಾಯುತ್ತ ಇರುವನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಣಿ
Next post ನ್ಯಾನೋ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys